ತಂಪುಗಾಳಿಯಂತೆ ಬಂದೆ
ರಾಷ್ಟ್ರಕವಿ ಡಾ ।। ಜಿ ಎಸ್ ಶಿವರುದ್ರಪ್ಪ ಅವರ ರಚನೆ, ಎಸ್ ಜಿ ರಘುರಾಂ ಅವರ ಸಂಗೀತ ಸಂಯೋಜನೆ ಹಾಗು ಗಾಯನ.
ತಪ್ಪದೆ ಈ ಇಂಪಾದ ಹಾಡನ್ನು ಕೇಳಿ
ಸಾಹಿತ್ಯ..
ತಂಪು ಗಾಳಿಯಂತೆ ಬಂದೆ
ಅಂದು ನನ್ನ ತೋಟಕೆ
ಮುಗಿದ ಮೊಗ್ಗೆ ಕಣ್ತೆರೆದವು
ನೀನು ಬಂದ ಮಾಟಕೆ
ಒಳಗಿನಿಂದ ಹೊಸ ಸುಗಂಧ
ಘಮ್ಮೆಂದು ಹೊಮ್ಮಿತು
ನನ್ನೊಳಗೆ ತಿಳಿಯದಡಗಿ-
ದಂತ ಹೊಸತು ಚಿಮ್ಮಿತು
ಅಹಾ ಏನು ಸೊಗಸು ಇದರ
ಕಂಪು ಎಂದರೆಲ್ಲರು
ಇಷ್ಟು ದಿವಸ ಎಲ್ಲಿತ್ತಿದು
ಎಂದು ಬೆರಗು ಗೊಂಡರು
ನಾನು ಕೂಡ ಬೆರಗಾದೆನೆ
ನಿನ್ನ ದಿವ್ಯ ಮಂತ್ರಕೆ
ಮಣಿದೆ ನಾನು ಮಣ್ಣಿನಿಂದ
ಗಂದ ತಂದ ತಂತ್ರಕ್ಕೆ
ಆದರೇಕೆ ಇಂದು ನೆಡೆದೆ
ಬಿರುಗಾಳಿಯ ಭರದಲಿ
ಹೂವ ಮುರಿದು ಹುಡಿಗೆ ಸುರಿದು
ನಿಷ್ಕರುಣಿಯ ತೆರದಲಿ
ಏಕೆಯೆಂದು ಕೇಳಲಾರೆ
ಬರಿಯ ಮೌನದುತ್ತರ
ಅರಿಯೆ ನಾನು ನಿನ್ನಿಚ್ಛೆಯ
ಹೈಮಾಚಲದೆತ್ತರ
ನಾನು ತಿಳಿವೆನೇನು ನಿನ್ನ ಅರ್ಥ ಪೂರ್ಣ ಚೋದ್ಯವ
ಯಾವ ಶಿವದ ಸೃಷ್ಟಿಗಾಗಿ ಇಂಥ ವಿಲಯ ವೈಭವ
#sweetkannada #kannadahadugalu #songs #oldisgold #kannadasongs #kannadahaadu #70years #melodysongs #melodyqueen #music #goodmusic #evergreenmusic #musicislife #instamusic #musician #musicvideo #artist #singer #composer #HRLeelavathi #September2021